Friday, February 17, 2012

ಮಾನವೀಯತೆಯು...ಮೀರಲು

ಗುಳಿ ಬಿದ್ದ ಕೆನ್ನೆ
ಮುಖದಲ್ಲಿ ಜೋತ ಚರ್ಮ
ಪ್ರೀತಿ ಮಮತೆಯ ಎದುರು
ನೋಡುತ್ತಿರುವ
ಬಸವಳಿದ ನಯನಗಳು
ಕ್ಷಣ ಹೊತ್ತು ಕಳೆದು
ಕಣ್ಣುಗಳು ಎರಡು ತಂಪಾಗಿ

ಹೆತ್ತವರಿಗೆ ಈ ಧೋರಣೆ
ಸರಿಯೇ?

ಹೊಟ್ಟೆ ಬಟ್ಟೆಗೆ ಕಟ್ಟು
ಹತ್ತಿಸಿದರು ಶಾಲೆಯ
ಮೆಟ್ಟಲು
ಹೊಳೆ ದಾಟಿದ ಮೇಲೆ
ಅಂಬಿಗನ ಮರೆತಂತೆ
ಹೆತ್ತ ತಂದೆ ತಾಯಿಯರಿಗೆ
ಮಾಡುವುದು ಸರಿಯೇ?

ನಿಮ್ಮ ಎಳೆ ವಯಸಲಿ
ತೋರಿದ ಮಮತೆ ಪ್ರೀತಿಗೆ
ಬೆಲೆ ಕಟ್ಟಿಯಾದರು
ಇಳಿ ವಯಸಲಿ ಪ್ರೀತಿಯ
ತೋರಬಾರದೇ?

Friday, January 20, 2012

ಮನದ ಬಯಕೆ


ಮನ ತುಂಬಿ ಬಂದಿರಲು
ಮನವೇಕೋ ಹವಣಿಸುತಿರಲು
ನೆನಪಾಯಿತು ಬಾಲ್ಯವು
ಹರಿಸಿತು ನೀರಿನ ಹೊಳೆಯ

ತಂಪಾದ ಮನ
ಹಳೆ ನೆನಪಿಗೆ ಓಗೊಡುತ್ತ
ನೆನೆಸಿತು ನೆನಪುಗಳ
ಭಾವನೆಗಳ ಸುಳಿಯಲಿ

---------------------

ಮನ ನೊಂದಿತು ನನ್ನಲ್ಲಿ
ನನ್ನನ್ನೇ ಕೇಂದ್ರಿಕರಿಸಿ
ನನ್ನ ಕುರಿತೇ ಬರೆಯುವೆ
ಸಾಕು ನಿಲ್ಲಿಸು ನಿನ್ನ
ದುಃಖ ಭಾವ
ನೆನಪುಗಳ ಲೋಕದಲಿ
ನನ್ನ ಮರೆತು ಸುಖೀ
ಜೀವನ ನಡೆಸು


Tuesday, December 6, 2011

ಕಂಬನಿಯ ಮಿಡಿತ


ಮತ್ತೆ ಮತ್ತೇಕದೊ ಆ ನೆನಪು
ನನ್ನನೇಕೆ ಕಾಡುತಿದೆ
ಹಳೆ ರಾಗವ ಹೊಸ ರೀತಿಯಲಿ
ಹಾಡಲೇಕೊ ಯತ್ನಿಸಿದೆ


ಭಾವುಕ ಮನ ಮನನದಲಿ
ಇರುತಿರೆ
ಕಣ್ಣುಗಳು ಕಂಬನಿಯ ಮಿಡಿಸಿ
ತಮ್ಮ ಇರುವನು
ತೋರುತಿರೆ


ಬಂದೆ ಬಂದಾವು ಹಳೆ ಕೊರಡಿಗೆ
ಜೀವದ ವರ ಕರುಣೆ
ಕಂಪಿಸದಿರು ಓ ಹ್ರದಯ
ನುಡಿಸದಿರು ರುದ್ರ ವೀಣೆ


Saturday, July 24, 2010

ಬಚ್ಚಿಟ್ಟ ನೋವು

ನನ್ನ ಗೆಳತಿ ತುಂಬಾ ಪಾಪದವಳು.ನನಗೆ ಅವಳಿಗೆ ವಯಸ್ಸಿನ ಅಂತರವಿಲ್ಲ. ಹೆಸರು ಸವಿನಯ..ಏನನ್ನೂ ಕೇಳಿದರೂ ಒಲ್ಲೆ ಎಂಬ ಪದದ ಅರ್ಥವೇ ಗೊತ್ತಿಲ್ಲದಂತವಳು.

ಮೊನ್ನೆ ಬಹಳ ಸಮಯದ ನಂತರ ನನ್ನ ಅವಳ ಭೇಟಿ.ಅವಳನ್ನು ಕಂಡಾಕ್ಷಣ ಮನಸ್ಸು ನಮ್ಮ ಹಿಂದಿನ ಭೇಟಿಯ ಕಾಲಕ್ಕೆ ಓಡಿತು.ಸ್ವಲ್ಪ ಸಮಯದ ತರುವಾಯ ಅವಳ ಗುಳಿ ಬಿದ್ದ ಕೆನ್ನೆಗಳು,ಒಡಲಿನ ಬೆಂಕಿಗೆ ಕರಟಿ ಹೋದಂತಿದ್ದ ಆ ಕಣ್ಣಿನ ಕೆಳಭಾಗ ಕಂಡು ಮನಸ್ಸಿಗೆ ಆಘಾತ.ಆ ದಿನದ ಸವಿನಯ ಇವಳಾ???

ಸ್ವಚ್ಛಂಧವಾಗಿ high school,college ಸಮಯದಲ್ಲಿ ಹಾರಾಡುತ್ತಿದ್ದ ಆ ಗೆಳತಿ,ಕನಸುಗಳು ಗರಿ ಬಿಚ್ಚಿ ಹಾರಾಡಬೇಕಾದ ಈ ಸಂಧರ್ಭದಲ್ಲಿ ಯಾಕೆ ಹೀಗಾದಳು??? ಎಂಬ ಪ್ರಶ್ನೆ ಪ್ರಶ್ನಾರ್ಥಕವಾಗಿ ನನ್ನ ಕಣ್ಣಲ್ಲಿ ಗೋಚರಿಸಿತು.

ತುಂಬಾ ಸಂಯಮದ ವ್ಯಕ್ತಿತ್ವದವಳು.ಯಾರೋಂದಿಗೂ ಅಷ್ಟೊಂದು ಸಲುಗೆಯಿಂದ ವ್ಯವಹರಿಸದವಳು.ಆದರೆ ತನ್ನದೆ ಅದ ವಿಶಿಷ್ಟ ಶೈಲಿಯ ಮಾತಿನಿಂದ ನಮ್ಮ ಸ್ನೇಹ ಸಮೂಹದಲ್ಲಿ ಕೇಂದ್ರಬಿಂದುವಾಗಿದ್ದಳು.

ಕುಶಲೋಪರಿಯ ಮಾತುಕತೆ ಆಯಿತು.ಅವಳು ತನ್ನ ಸ್ಮ್ರತಿಪಟಲದ ನೆನಪಿನ ಸುರುಳಿ ಬಿಚ್ಚಲಾರಂಭಿಸಿದಳು.

ಹೆಚ್ಚಿನ ಓದಿಗಾಗಿ ಪಟ್ಟಣ ಸೇರಿದ ಸವಿನಯ ಓದಿನಲ್ಲಿ ತನ್ನದೇ ಛಾಪು ಒತ್ತಿದ್ದಳು.ಓದು successsfully ಪೂರ್ಣಗೊಂಡಿತು.ಆದರೆ ಓದಿನ ಸಮಯದಲ್ಲಿ ಸ್ವಲ್ಪ ಎಡವಿದಳು.ಯೌವ್ವನ ಚಿಗುರುವ ಕಾಲದಲ್ಲಿ ಅವಳ ಮನಸ್ಸು ಒಂದು ಹುಡುಗನೆಡೆಗೆ ವಾಲಿತು.ತುಂಬಾ ಇಷ್ಟಪಟ್ಟಳು.ಮುಂದಿನ ಕಷ್ಟ ಘಳಿಗೆಯ ಅರಿವಿರದೆ;ಅಷ್ಟು ಸಂಯಮದ ಹುಡುಗಿ ಈ ಸ್ಠಿತಿಗೆ ಬರುತ್ತಾಳೆಂದು ಊಹಿಸಿರಲಿಲ್ಲ.ಆದರೆ ಇದು ತಪ್ಪೇ?ಖಂಡಿತ ಇಲ್ಲ..ಆಧುನಿಕ ಯುಗದಲ್ಲಿ ಹುಡುಗ ಹುಡುಗಿಯರ ಸ್ನೇಹ,ಪ್ರೇಮದಲ್ಲಿ ಕೊನೆಗೊಳ್ಳುವ ವಿರಳ ಉದಾಹರಣೆಗಳಲ್ಲಿ ಒಂದಾಗಿ ಹೋದಳು ನನ್ನ ಗೆಳತಿ..!!!

ಮನಸ್ಸು ಲಂಗು ಲಗಾಮಿಲ್ಲದ ಕುದುರೆಯಂತೆ ಓಡಾಡಿತು.ಆದರೆ ಪ್ರಶಂಸಾತ್ಮಕ ಅಂಶವೆಂದರೆ ತನ್ನತನ ಮರೆಯಲಿಲ್ಲ.ಹುಡುಗನ ಅಕ್ಕರೆಯ ಸವಿ ಮಾತುಗಳು ಪ್ರೇಮಲೋಕದಲ್ಲಿ ತೇಲುತ್ತಿದ್ದಳು.ದಿನಗಳುರುಳಿದವು..ಆದರೆ...........ಇಬ್ಬರಲ್ಲು ಮನಸ್ತಾಪದಂತಹ ಅಂಶಗಳು ಬೆಳಕಿಗೆ ಬಂದವು..ಇವಳು ಚಿಂತಾಕ್ರಾಂತಳಾದಳು...ಪಾಪ..
ಯಾವುದೆ ಸಂಬಂಧದಲ್ಲಿ ಹೊಂದಾಣಿಕೆ,ಪ್ರೀತಿ ಇಲ್ಲದಿದ್ದರೆ ಜಗಳ,ಕೋಪ,ಮನಸ್ತಾಪಗಳು ಸಾಮಾನ್ಯ. ನನ್ನ ಮನಸ್ಸು ಸವಿನಯ ಹಾಗು ಅವಳ ಹುಡುಗನ ಸಂಬಂಧದಲ್ಲಿ ಆದ ಬದಲಾವಣೆಗೆ ಕಾರಣರಾರು??ಎಂಬ ಪ್ರಶ್ನೆಗೆ ಉತ್ತರಕ್ಕಾಗಿ ಅವಳನ್ನೆ ನೋಡುತ್ತಿತ್ತು.ಅವಳ ಕಣ್ಣುಗಳು ತನ್ನದೇ ಇರಬಹುದೆಂಬ ಕಳವಳದಲ್ಲಿ ನಿಸ್ತೇಜವಾಗಿ ನನ್ನನ್ನೇ ದಿಟ್ಟಿಸಿದವು..
ಪ್ರೀತಿಯ ಸೆಳೆತ ಕಂಡಿತು ಆ ಕಣ್ಣಲ್ಲಿ......
ಬೇರೆ ಕೆಲಸ ಇದೆಯೆಂದಾಕ್ಷಣ bye ಎಂದಿತಾದರು ಮನಸ್ಸು ಅವಳನ್ನು ಇನ್ನೊಮ್ಮೆ ಭೇಟಿಯಾಗಿ ಅವಳನ್ನು ಆ ಮಯಲೋಕದಿಂದ ಹೊರತರಬೇಕೆಂದು ನಿರ್ಧರಿಸಿದೆನು..ಮನಸ್ಸು ಮನಸ್ಸುಗಳ ಪರಿಹಾರ ಯಶಸ್ವಿಯಾಗುವುದೆಂಬ ಹಂಬಲ.:-)



"ಆರಾಮಾಗಿ ಇದ್ದೆ ನಾನು
ನಿನ್ನ ಕಂಡು ಅರೆ! ಏನಾಯಿತೊ
ಅರೆ! ಏನಾಯಿತು..ಅಲೆ ಜೋರಾಯಿತು..
ಬಾಳು ಸಿಹಿಯಾದ ಅಪಘಾತವಾಯಿತು..
ಮರು ಮಾತಾಡದೆ ಖುಷಿ ನೂರಾಯಿತು..
ಈ ವ್ಯಾಮೋಹ ವಿಪರೀತವಾಯಿತು...." ಹಾಡೊಂದು ನೆನಪಾಯಿತು........:-):-)